ವಿಶ್ವವಿದ್ಯಾನಿಲಯ ಸ್ಥಾಪನೆ

ಈ ಬಯಲು ಸೀಮೆ/ಮೈದಾನ ಪ್ರದೇಶದ ಭಾಗದಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕೆಂಬ ಹಲವಾರು ವರ್ಷದ ಬೇಡಿಕೆಗನುಗುಣವಾಗಿ ದಿನಾಂಕಃ18.08.2009ರಂದು ರಾಜ್ಯ ಸರ್ಕಾರವು ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿತು. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಈ ಹೊಸ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನವು “ಶಿವಗಂಗೋತ್ರಿ” ಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆಃ04ಕ್ಕೆ ಹೊಂದಿಕೊಂಡಿದ್ದು, ಬಾಡಾ ಕ್ರಾಸ್‍ನಿಂದ 05 ಕೀ.ಮಿ. ದೂರದಲ್ಲಿ ಈ ವಿಶ್ವವಿದ್ಯಾನಿಲಯವು ತನ್ನ ಕಾರ್ಯಸೌಧವನ್ನು ಹೊಂದಿರುತ್ತದೆ. ದಾವಣಗೆರೆ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಈ ಕೆಳಕಂಡ ಧೇಯೋದ್ದೇಶಗಳನ್ನು ಹೊಂದಿದೆ.